ಸಂಪಾದಕರು:-ಹೆಚ್ ಎಸ್ ವಿ🖍
ವಿಶೇಷ ಕಳ್ಳತನದ ವರದಿ:-ಬಾಳೂರು ಗ್ರಾ.ಪಂ.”PDO”ಸ್ಟಾರ್ ಆಫ್ ಶಿವಮೊಗ್ಗ 🌠🖍ಪೋನ್ ಕರೆಯಲ್ಲಿ ಹೇಳಿದ್ದೇನು.!?🖍
ರಾತ್ರೋರಾತ್ರಿ ಬೋರ್ ಮೋಟರ್ ಕಳ್ಳತನದಲ್ಲಿ ಭಾಗಿ ಗ್ರಾ.ಪಂ.ಮಾಜಿ ಮೆಂಬರ್ “ದಿವಾಕರ್”ಸೇರಿದಂತೆ ಮೂವರ ವಿರುದ್ಧ ರಿಪ್ಪನಪೇಟೆ ಠಾಣೆಗೆ ಮಹಿಳಾ PDO ದೂರು ಅರ್ಜಿಕೊಟ್ಟು ದಕ್ಷತೆ ಮೆರೆದಿದ್ದಾರೆ.
ಎನಪ್ಪಾ ಕಲಿಯುಗ.!? ಗ್ರಾ.ಪಂ.ಚುನಾವಣೆ ಯಲ್ಲಿ ಜನ ಕಳ್ಳನಿಗೆ ಮತಹಾಕಿ ಗೆಲ್ಲಿಸಿ ಗ್ರಾ.ಪಂ. ಪಡಸಾಲೆಯಲ್ಲಿ ಕುರಿಸಿದ ಹಾಗಿದೆ. ಮಾಜಿ ಸದಸ್ಯ ದಿವಾಕರ್ ಎಂಬಾತನು ಗ್ರಾ.ಪಂ.ಗೆ ಸಂಭಂಧಿಸಿದ ಜನಗಳ ತೆರಿಗೆ ಹಣದಲ್ಲಿ ಖರೀದಿಸಿದ ಪಂಪ್-ಸೆಟ್ ಮೋಟ್ರು ವನ್ನು ಖದೀಯಲು ಸ್ವತಃ ಮಾಜ ಸದಸ್ಯನೆ ಭಾಗಿಯಾಗಿದ್ದನೆಂದರೆ ಇದಕ್ಕಿಂತ ಇನ್ನೊಂದು ದುರಂತ ಬೇಕೆ ಎಂಬ ಮತಹಾಕಿ ದವರು ತಲೆತಗ್ಗಿಸುವಂತ ಸ್ಥಿತಿ ಶಿವಮೊಗ್ಗ ಜಿಲ್ಲೆಯ ಹೊಸನಗರ(ತಾ)ರಿಪ್ಪನಪೇಟೆ ಯಲ್ಲಿ ಘಟನೆ ವಾರದ ಹಿಂದೆ ಜರುಗಿದೆ.🖍
ರಿಪ್ಪನ್ಪೇಟೆ ವ್ಯಾಪ್ತಿಯಲ್ಲಿ ರಾತ್ರೋರಾತ್ರಿ ಬೋರ್ವೆಲ್ ಮೋಟರ್ ಕಳ್ಳತನ ನಡೆ ದಿರುವ ಘಟನೆ ಬೆಳಕಿಗೆ ಬಂದಿದ್ದು.ಈ ಸಂಬಂಧ ಮಾಜಿ ಮೆಂಬರ್ “ದಿವಾಕರ್ ” ಕೆತ್ತಲಗುಡ್ಡೆಯ”ದಾನೇಶ್ ” ಹಾಗೂ ಗಾಳಿಬೈಲಿನ “ರಿಯಾಜ್ “ಅವರ ವಿರುದ್ಧ ಆರೋಪ ಕೇಳಿಬಂದಿದೆ.🖍
ಪೋಲಿಸರು ಚಾಣಕ್ಷತನ ಮೆರೆದುಬಿಟ್ರಾ.!?
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವ ಜನಿಕ ತೆರಿಗೆ ಹಣದಲ್ಲಿ ಖರೀದಿಸಿದ ಸಾರ್ವ ಜನಿಕ ಬಳಕೆಯ ಬೋರ್-ಮೋಟರ್ ಅನ್ನು ಕಳ್ಳತನ ಮಾಡಲಾಗಿದೆ ಎಂದು ದಕ್ಷ ಮಹಿಳಾ ಅಧಿಕಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ರವರು ರಿಪ್ಪನ್ಪೇಟೆ ಪೊಲೀಸ್ ಠಾಣೆಗೆ ದೂರು ಅರ್ಜಿ ಕೊಟ್ಟರು ಮೊದಲಿಗೆ ರಾಜಿ-ಸಂದಾನದ ಸನ್ನಿವೇಶ ಗಳು ನೆಡೆದವು ಎನ್ನಲಾಗಿದ್ದು PDO ಪಟ್ಟು ಬಿಗಿಯಾದಗ (NC) non-conceibelle ನೀಡಿದ್ದಾರೆ ಎನ್ನಲಾಗಿದೆ.ದೂರಿನ ಆಧಾರದ ಮೇಲೆ ಪೊಲೀಸರು ದೂರು ತೆಗೆದುಕೊಂಡು ತನಿಖೆ ಆರಂಭಿಸಿದ್ದಾರೆಂದು ಹೇಳಲಾಗಿದ್ದು pi ರಾಜುರೆಡ್ಡಿ ಖಡಕ್ ಅಧಿಕಾರಿಯಾಗಿದ್ದು ಈ ಪ್ರಕರಣದಲ್ಲಿ ಹೇಗೆ ದಕ್ಷತೆ ಮೆರೆಯು ತ್ತಾರೆ ಕಾದುನೋಡಬೇಕಾಗಿದೆ. ಸ್ಥಳೀಯ ರಲ್ಲಿ ಈ ಘಟನೆ ಕೂತುಹಲ ಮೂಡಿಸಿದ್ದು, ಸಾರ್ವಜನಿಕ ಆಸ್ತಿಯನ್ನು ಕಳವು ಮಾಡಿದ ವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.🖍ಹೆಚ್ ಎಸ್ ವಿ ಸಂಪಾದಕರು.





